ಧೃತಿ ಸಿನೆಮಾ ಲಾಂಛನದಲ್ಲಿ ಎಂ.ನಾಗರಾಜು ಅವರು ನಿರ್ಮಿಸಿರುವ ‘ಬಾನಾಡಿ ಚಿತ್ರ ನವಂಬರ್ ೧೪ ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ಈ ಮಕ್ಕಳ ಚಿತ್ರ ಬಿಡುಗಡೆಯಾಗುತ್ತಿರುವುದು ವಿಶೇಷ.
ನಾಗರಾಜ ಕೋಟೆ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ರಾಮನಗರ, ಶ್ರೀಂಗಪಟ್ಟಣ, ಚನ್ನಪಟ್ಟಣ ಮುಂತಾದ ಕಡೆ ಚಿತ್ರೀಕರಣ ನಡೆದಿದೆ.
ಕಾರ್ತಿಕ್ಶರ್ಮ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಾಸನ ಮಂಜು ಸಹ ನಿರ್ದೇಶನವಿರುವ ‘ಬಾನಾಡಿಗೆ ಸಭಾಕುಮಾರ್ ಅವರ ಛಾಯಾಗ್ರಹಣವಿದೆ. ನಾಗರಾಜ ಕೋಟೆ ಅವರ ‘ಉಸಿರು ಕೃತಿ ಆಧಾರಿತವಾಗಿರುವ ಈ ಚಿತ್ರಕ್ಕೆ ಗೂಡಿನಿಂದ ಗಗನದೆಡೆಗೆ ಎಂಬ ಅಡಿಬರಹವಿದೆ. ದತ್ತಣ್ಣ, ರಾಜೇಶ್, ಅಭಿನಯ, ಮಾಸ್ಟರ್ ಪ್ರಪುಲ್ ವಿಶ್ವಕರ್ಮ, ಕುಮಾರಿ ಧೃತಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.